2019ರ ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡ್ರು ಹಾಗು ಆರ್ ಅಶೋಕ್ ಮುಖಾಮುಖಿ? | Oneindia Kannada

Oneindia Kannada 2018-09-01

Views 222

ರಾಜ್ಯ ಬಿಜೆಪಿಯಲ್ಲಿ ಈಗ ಮಂಡ್ಯ ಲೋಕಸಭೆ ಸ್ಥಾನಕ್ಕೆ ಸಂಬಂಧಿಸಿದಂತೆ ವರಿಷ್ಠರ ಮೌನ ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಇದರ ಜತೆಗೆ ಕೆಲವು ರಾಜ್ಯ ನಾಯಕರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಖಚಿತ ಮೂಲಗಳ ಪ್ರಕಾರ, ನೀವು ಸ್ಪರ್ಧೆಗೆ ಸಿದ್ಧರಿರಿ ಎಂಬ ಸೂಚನೆಯನ್ನು ಕೆಲವರಿಗೆ ಈಗಾಗಲೇ ನೀಡಿಯೂ ಆಗಿದೆ. ಮೇಲ್ಮೈಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದೆ, ಒಳಗೇ ಹರಿಯುವ ವಿದ್ಯುತ್ ನಂತೆ ಬೆಳವಣಿಗೆಗಳು ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿವೆ. ಅದರಲ್ಲೂ ಯಾವಾಗ ದೇವೇಗೌಡರು ಈ ಸಲ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವು ಸಿಕ್ಕಿತೋ ಆಗಿನಿಂದ ಬಿಜೆಪಿಯು ಸಹ ಸರಿಯಾದ ನಡೆಯನ್ನೇ ಮುಂದಿಡಲು ಆಲೋಚಿಸುತ್ತಿದೆ.

Former deputy chief minister R Ashok may be the in charge or contestant of Mandya constituency for Lok Sabha polls. Here is an analysis.

Share This Video


Download

  
Report form
RELATED VIDEOS