News Cafe | Congress Fight Against Agnipath Scheme Continues | June 22, 2022

Public TV 2022-06-22

Views 3

ದೇಶಾದ್ಯಂತ ಯುವ ಸಮೂಹದ ತೀವ್ರ ವಿರೋಧದ ನಡುವೆ ಜಾರಿ ಮಾಡಲಾಗುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ದೊಡ್ಡ ಹೋರಾಟ ಮಾಡ್ತಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ಕರೆದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೋನಿಯಾಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ದೇಶದ ಎಲ್ಲ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ನಾಯಕರು, ಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ರಾಜ್ಯದ ಕಾಂಗ್ರೆಸ್‍ನ ಹಲವು ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸಭೆಯಲ್ಲಿ ದೇಶದ್ಯಾಂತ ಸರಣಿ ಹೋರಾಟಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. 3 ಕೃಷಿ ಕಾನೂನುಗಳ ವಿರುದ್ಧ ನಡೆದ ಸುಧೀರ್ಘ ಹೋರಾಟದಂತೆ ಅಗ್ನಿಪಥ್ ವಿರುದ್ಧ ಸುಧೀರ್ಘ ಅಭಿಯಾನ ನಡೆಸುವ ಮೂಲಕ ಕಾಂಗ್ರೆಸ್‍ನತ್ತ ಯುವಕರನ್ನು ಸೆಳೆಯುವ ಚಿಂತನೆಯಲ್ಲಿ ಎನ್ನಲಾಗುತ್ತಿದೆ. ಹೀಗಾಗಿ ಹೋರಾಟದ ರೂಪುರೇಷೆಗಳು ಹೇಗಿರಬೇಕು..? ರಾಜ್ಯವಾರು ಪ್ರತಿಭಟನೆಗಳು ಹೇಗೆ ನಡೆಯಬೇಕು..? ಕಾಂಗ್ರೆಸ್ ನಾಯಕರ ಜವಾಬ್ದಾರಿ ಹೇಗಿರಬೇಕು..? ಎನ್ನುವ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆಗಳಿದೆ.

#publictv #newscafe #agnipathscheme #congress

Share This Video


Download

  
Report form