'ಬಿಜೆಪಿಯು ನಿಮ್ಮ ಹಾದಿ ತಪ್ಪಿಸುತ್ತಿದೆ, ಸದನಕ್ಕೆ ಬಂದು ನಿಮ್ಮ ರಾಜಕೀಯ ಜೀವನವನ್ನು ಉಳಿಸಿಕೊಳ್ಳಿ' ಎಂದು ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರಿಗೆ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಗುರುವಾರ ಎತ್ತಿದ್ದ ಕಾರ್ಯಲೋಪಕ್ಕೆ ಸ್ಪೀಕರ್ ಅವರು ಇಂದು ನೀಡಿರುವ ರೂಲಿಂಗ್ ಅನ್ನು ಉಲ್ಲೇಖಿಸಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಉಲ್ಲೇಖಿಸಿ ಅತೃಪ್ತರು ಅನರ್ಹರಾಗುವ ಸಾಧ್ಯತೆ ಇದೆ ಎಂದರು.
Minister DK Shivakumar requested dissident MLAs to come back and take back the resignation. He said, as per the anti-defection law they will be unqualified.